ರೈತ ತೀರ್ಪಿನಲ್ಲಿ ಅಡಗಿರುವ ಮೌಲ್ಯಗಳನ್ನು ಪ್ರಚಾರಕ್ಕೆ ತರಲು ನಡೆಯುತ್ತಿರುವ ಪ್ರಯತ್ನಗಳೇ ರೈತರ ದುಂಡು ಮೇಜುಗಳು.
ವಿವಧ ಫಲಾನುಭವಿಗಳನ್ನು ಒಳಗೊಂಡಂತೆ ಕರ್ನಾಟಕದಾದ್ಯಂತ ಏಳು ದುಂಡು ಮೇಜುಗಳನ್ನು ನಡೆಸಲಾಗುತ್ತಿದೆ. ಇವುಗಳ ಉದ್ದೇಶ ರೈತರಿಗೆ ರೈತ ತೀರ್ಪಿನ ಅಗತ್ಯತೆಯನ್ನು ವಿವರಿಸುವುದು. ವಿಶೇಷವಾಗಿ ಸಣ್ಣ, ಅತಿಸಣ್ಣ ರೈತರು, ಮಹಿಳೆಯರು ಮತ್ತು ಅಲಕ್ಷಿತ ಸಮುದಾಯಗಳನ್ನು ಕೃಷಿ ಸಂಶೋಧನೆಯ ಗೊತ್ತು-ಗುರಿಗಳ ಭಾಗವಾಗಿ ಒಳಗೊಳ್ಳುವಂತೆ ಪ್ರೇರೇಪಿಸುವುದು. |